ಮಂಗಳೂರು: ಮಸೀದಿಗಳ ಮೈಕ್ನಲ್ಲಿ ಕಾಫಿರರನ್ನು ಕೊಲ್ಲಿರಿ, ಹೊಡೆಯಿರಿ ಎಂದು ಕೂಗುತ್ತಾರೆ! ಗಿರೀಶ್ ಮಟ್ಟಣ್ಣವರ್ ಕಿಡಿ!
Wednesday, June 4, 2025
ಬೆಂಗಳೂರು: ಕೋಮುಗಲಭೆ ನಿಯಂತ್ರಣ ಉದ್ದೇಶದಿಂದ 36 ಮಂದಿಯನ್ನು ಗಡೀಪಾರು ಮಾಡಲು ಪೊಲೀಸ್ ಇಲಾಖೆ ಸಿದ್ದವಾಗಿದ್ದು, ಈ ಪಟ್ಟಿಯಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೆಸರು ಇದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣವರ್, ಇದು ಸೌಜನ್ಯ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ. ಸೌಜನ್ಯ ಹೋರಾಟ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲ ಕರಾವಳಿಯಲ್ಲಿ ಕೋಮುಗಲಭೆ ನಡೆದ ಇತಿಹಾಸವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದ ಲೈವ್ನಲ್ಲಿ ಮಾತನಾಡಿದ ಮಟ್ಟಣ್ಣವರ್, ಸುಮಾರು ಮಸೀದಿಗಳಲ್ಲಿ ಜಿಹಾದ್, ಜಿಹಾದ್ ಅಂತಿರ್ತಾರೆ. ಕಾಫಿರರನ್ನು ಕೊಲ್ಲಿರಿ, ಹೊಡೆಯಿರಿ ಎಂದು ಮೈಕ್ನಲ್ಲಿ ಕಿರುಚಾಡುವುದನ್ನು ಕೇಳಿದ್ದೇನೆ. ಪೊಲೀಸರು ಅದನ್ನು ಯಾವತ್ತಾದರೂ ಐಡೆಂಟಿಫೈ ಮಾಡಿದ್ದಾರ? 'ಶರ್ ತನ್ ಸೇ ಜುದಾ' ಅಂತಾ ದೊಡ್ಡ ದೊಡ್ಡ ಪೋಸ್ಟ್ ಹಾಕುತ್ತಿರುತ್ತಾರೆ. ಇಂತಹವರಿಂದಲೇ ಅಮಾಯಕ ಪ್ರವೀಣ್ ನೆಟ್ಟಾರು ಹ*ತ್ಯೆಯಾಗಿದೆ ಎಂದಿದ್ದಾರೆ.
ಮೊದಲು ಈ ರಾಜ್ಯದಿಂದ ಚಕ್ರವರ್ತಿ ಸೂಲಿಬೆಲೆ, ಪುನೀತ್ ಕೆರೆಹಳ್ಳಿಯನ್ನು ಗಡೀಪಾರು ಮಾಡಬೇಕು. ಯಾವೊಂದು ಕೋಮುದ್ವೇಷ ಪ್ರಚೋದಿಸದ ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಕ್ರಮವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದಿದ್ದಾರೆ.