.jpg)
BJP: `ನಿಮ್ಮಲ್ಲಿ ತಾಕತ್ತಿದೆ' ಬಿಜೆಪಿಯನ್ನ ಶ್ಲಾಘಿಸಿದ ಮುಸ್ಲಿಂ ಮುಖಂಡ!!
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನ NIA ತನಿಖೆಗೆ ಹಸ್ತಾಂತರದ ಬೆನ್ನಲ್ಲೇ ಕಾಂಗ್ರೆಸ್ ನ ಮುಸ್ಲಿಂ ನಾಯಕರಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ.
ಹೌದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು NIA ಗೆ ವಹಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ Narendra Modi ಜೀ, ಮಾನ್ಯ ಕೇಂದ್ರ ಗೃಹ ಸಚಿವರಾದ ಶ್ರೀ Amit Shah ಜೀ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ J.P.Nadda ಜೀ, ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರವರಿಗೆ @Santhosh BL ರವರಿಗೆ ಸಮಸ್ತ ಜಿಲ್ಲೆಯ ಜನತೆಯ ಪರವಾಗಿ ಅನಂತ ಕೋಟಿ ಧನ್ಯವಾದಗಳು ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.
ಈ ಸೋಶಿಯಲ್ ಮೀಡಿಯಾ ಪೋಸ್ಟ್ ಗೆ ಕಾಂಗ್ರೆಸ್ ನ ಮುಸ್ಲಿಂ ಮುಖಂಡ ಸುಹೇಲ್ ಕಂದಕ್ ಅವರು ಬಿಜೆಪಿಯನ್ನ ಶ್ಲಾಘಿಸಿ ಕಮೆಂಟ್ ಮಾಡಿದ್ದಾರೆ. 'ನಿಮ್ಮಲ್ಲಿ ತಾಕತ್ತಿದೆ' ಎಂದು ಬಿಜೆಪಿಯನ್ನ ಶ್ಲಾಘಿಸಿದ ಅವರು, ನಮ್ಮ ಇಬ್ಬರು ಮುಸ್ಲಿಂ ಯುವಕರ ಹತ್ಯೆಯನ್ನೂ ಕೂಡ ಎನ್ ಐಎಗೆ ವಹಿಸಿ ನಮ್ಮವರಿಗೂ ನ್ಯಾಯ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಿಮ್ಮ ಲಿಸ್ಟ್ ನಲ್ಲಿ ಕುಡುಪು ಅಶ್ರಫ್ ಹಾಗೂ ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣವನ್ನೂ ಸೇರಿಸಿ ನ್ಯಾಯ ಒದಗಿಸಿ. ನಿಮ್ಮಲ್ಲಿ ತಾಕತ್ತಿದೆ, ನಮ್ಮಲ್ಲಿ ಪೊಟ್ಟು ವಾಟ್ಸಪ್ ಚರ್ಚೆಗಳಿವೆ ಎಂದು ಹೇಳಿ ಬಿಜೆಪಿ ನಾಯಕರನ್ನ ಶ್ಲಾಘಿಸಿ ಕಾಂಗ್ರೆಸ್ ಪಕ್ಷದ ಕಾಳೆಲೆದಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಆಂತರಿಕ ಕಲಹ ಏರ್ಪಟ್ಟಿದೆ. ಇದು ಕರಾವಳಿಯಲ್ಲಿ ಕಾಂಗ್ರೆಸ್ ಗೆ ಮತ್ತೆ ನುಂಗಲಾರದ ತುತ್ತಾಗಿದೆ.