MANGALORE: ಹಿಂದೂ ಯುವತಿ ಮುಸ್ಲಿಂ ಯುವಕ ಸರಸ ಸಲ್ಲಾಪ!!
ಮಂಗಳೂರು: ಮಂಗಳೂರಿನ ಬಲ್ಲಾಲ್ ಭಾಗ್ ನ ಕೆಫೆಯೊಂದರಲ್ಲಿ ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಇರುವ ಬಗ್ಗೆ ಮಾಹಿತಿ ತಿಳಿದ ಬಜರಂಗದಳ ಕಾರ್ಯಕರ್ತರು ಇಬ್ಬರನ್ನು ಹಿಡಿದು ಬರ್ಕೆ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಎನ್ನಲಾಗಿದೆ. ಇವರಿಬ್ಬರು ಸರಸ ಸಲ್ಲಾಪದಲ್ಲಿ ತೊಡಗಿದ್ರು. ಈ ವೇಳೆ ಖಚಿತ ಮಾಹಿತಿಯನ್ನ ತಿಳಿದು ಬಜರಂಗದಳ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಬಳಿಕ ಇಬ್ಬರನ್ನ ಪೊಲೀಸರಿಗೊಪ್ಪಿಸಿದ್ದಾರೆ.
ಕರಾವಳಿಯಲ್ಲಿ ಇದೀಗ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹಿಂದೂ ಸಂಘಟನೆಗಳು ಈಗಾಗ್ಲೇ ದೆಹಲಿ ಪ್ರಕರಣವನ್ನಿಂಟುಕೊಂಡು ದ.ಕ. ಜಿಲ್ಲೆಯ ಅಲ್ಲಲ್ಲಿ ಪೋಸ್ಟರ್ ಗಳನ್ನು ಹಾಕಿದ್ದಾರೆ. ಹೀಗಿರುವಾಗ ಇಂತಹ ಒಂದೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜೊತೆಗೆ ಮಂಗಳೂರಿನಲ್ಲಿ ಬಜರಂಗದಳ ಹದ್ದಿನ ಕಣ್ಣು ಇಟ್ಟು ಕೆಲ ಪ್ರಕರಣಗಳನ್ನ ಹಿಡಿದು ಪೊಲೀಸರಿಗೊಪ್ಪಿಸುವ ಕಾರ್ಯ ಮಾಡುತ್ತಿವೆ. ಆದ್ರೆ ನಾವ್ ಹೇಳೋದು ಇಷ್ಟೇ ಪೊಲೀಸರೇ ಸಾಧ್ಯವಾದ್ರೆ ನೀವ್ ಲವ್ ಜಿಹಾದ್ಗೆ ಬ್ರೇಕಿ ಹಾಕಿ, ಇಲ್ಲವಾದಲ್ಲಿ ಬಜರಂಗದಳ ಅಟ್ಯಾಕ್ ಮಾಡೋದನ್ನ ನಿಲ್ಲಿಸಿ. ಇವೆರಡರ ಮೇಲೆ ಪೊಲೀಸರು ಹದ್ದಿಣ ಕಣ್ಣು ಇಟ್ಟಲ್ಲಿ ಸಮಾಜದಲ್ಲೂ ಶಾಂತಿ ಕಾಪಾಡಬಹುದು.