-->
Mangaluru: ಲವ್ ಜಿಹಾದ್ ವಿರುದ್ಧ ರಕ್ತಪಾತದ ಎಚ್ಚರಿಕೆ ನೀಡಿದ ಭಜರಂಗದಳದ ಸಂಚಾಲಕ!

Mangaluru: ಲವ್ ಜಿಹಾದ್ ವಿರುದ್ಧ ರಕ್ತಪಾತದ ಎಚ್ಚರಿಕೆ ನೀಡಿದ ಭಜರಂಗದಳದ ಸಂಚಾಲಕ!

 


ಮಂಗಳೂರು: ಗುರುವಾರ ನಗರದ ನಂತೂರು ಬಳಿ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣದ ಹೊಣೆಯನ್ನು ಭಜರಂಗದಳ ಹೊತ್ತುಕೊಂಡಿದೆ. ಅಲ್ಲದೇ, ನಂತೂರು ಘಟನೆ ಕೇವಲ ಸ್ಯಾಂಪಲ್ ಅಷ್ಟೇ ಎಂದು ಮಂಗಳೂರು ಭಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಹೇಳಿದ್ದಾರೆ.



ಗುರುವಾರ ಸಂಜೆ ನಂತೂರಿನಲ್ಲಿ ನಿಟ್ಟೆ ಕಾಲೇಜಿನ ಭಿನ್ನ ಕೋಮಿನ ಜೋಡಿಯನ್ನು ಬಸ್ ನಿಂದ ಕೆಳಗಿಳಿಸಿ ಯುವಕನಿಗೆ ಹಲ್ಲೆ ನಡೆಸಿ, ಯುವತಿಗೆ ನಿಂದಿಸಿದ ಘಟನೆ ವರದಿಯಾಗಿತ್ತು. ಅನೈತಿಕ ಪೊಲೀಸ್ ಗಿರಿ ನಡೆದ ಬೆನ್ನಿಗೆ ಹೇಳಿಕೆ ನೀಡಿರುವ ಪುನೀತ್ ಅತ್ತಾವರ, ಹೀಗೆ ಮುಂದುವರೆದಲ್ಲಿ ರಕ್ತಪಾತದ ಎಚ್ಚರಿಕೆ ನೀಡಿದ್ದಾರೆ.



‘‘ಪದೇ ಪದೇ ಹೇಳುತ್ತಿದ್ದೇವೆ ಹಿಂದೂ ಹುಡುಗಿಯರ ಜೊತೆ ತಿರುಗಾಡಬೇಡಿ. ಲವ್ ಜಿಹಾದ್ ಮಾಡಿ ಹಿಂದೂ ಹುಡುಗಿಯರ ಬಾಳು ಹಾಳು ಮಾಡಬೇಡಿ. ಆದರೂ ನೀವು ಕೇಳುತ್ತಿಲ್ಲ. ನಂತೂರು ಘಟನೆ ಕೇವಲ ಸ್ಯಾಂಪಲ್ ಮಾತ್ರ. ಇನ್ನೂ ಕೂಡ ನೀವು ಲವ್ ಜಿಹಾದ್ ನಿಲ್ಲಿಸದಿದ್ದರೆ ನಿಮಗೆ ಮಯ್ಯತ್ತ್ (ಮೃತದೇಹ) ಶತಸಿದ್ಧ‘‘ ಎಂದು ಪುನೀತ್ ಅತ್ತಾವರ ನೀಡಿದ್ದಾರೆ ಎನ್ನಲಾದ ಪೋಸ್ಟರ್ ವೊಂದು ವೈರಲ್ ಆಗುತ್ತಿದೆ.   

Ads on article

Advertise in articles 1

advertising articles 2

Advertise under the article