-->
ಬೆಂಗಳೂರು: ಸರಕಾರಿ ಶಾಲೆ ನಡೆಸಲು ಪೋಷಕರಿಂದಲೇ ಹಣ ವಸೂಲಿ!

ಬೆಂಗಳೂರು: ಸರಕಾರಿ ಶಾಲೆ ನಡೆಸಲು ಪೋಷಕರಿಂದಲೇ ಹಣ ವಸೂಲಿ!



ಬೆಂಗಳೂರು: ಸರಕಾರಿ ಶಾಲೆ ಖರ್ಚು ವೆಚ್ಚಗಳಿಗೆ ಮಕ್ಕಳ ಪೋಷಕರಿಂದ ಪ್ರತಿ ತಿಂಗಳು ದೇಣಿಗೆ ರೂಪದಲ್ಲಿ ₹100 ಸಂಗ್ರಹಿಸಲು ಶಾಲಾಭಿವೃದ್ಧಿ ಸಮಿತಿಗೆ (SDMC) ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇಲಾಖೆಯ ಈ ಸುತ್ತೋಲೆ ಹೊರ ಬರುತ್ತಲೇ ಸರಕಾರದ ವಿರುದ್ಧ ಶಿಕ್ಷಣ ತಜ್ಞರು ಆಕ್ಷೇಪವೆತ್ತಿದ್ದಾರೆ. ಇದು ಮಕ್ಕಳ ಮೂಲಭೂತ ಶಿಕ್ಷಣದ ಹಕ್ಕನ್ನು ಕಸಿಯುವ ಪ್ರಯತ್ನ ಎಂದು ಆರೋಪಿಸಿದ್ದಾರೆ. 

ರಾಜ್ಯದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈ ರೂಪದ ದೇಣಿಗೆ ಸಂಗ್ರಹಿಸಲು ಅನುಮತಿ ನೀಡಿರುವುದು ಹಲವು ಚರ್ಚೆಗೆ ಕಾರಣವೂ ಆಗಿದೆ. 

ಸುತ್ತೋಲೆಯಲ್ಲಿ ಶಿಕ್ಷಣ ಇಲಾಖೆಯು, "ಸರಕಾರಿ ಶಾಲೆ ನಡೆಯಬೇಕೆಂದರೆ ಸಾರ್ವಜನಿಕರ ಸಹಕಾರ ಅಗತ್ಯ. ಈಗಾಗಲೇ 'ನನ್ನ ಶಾಲೆ - ನನ್ನ ಕೊಡುಗೆ' ಯೋಜನೆಯಡಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಹಾಗಾಗಿ ಮಕ್ಕಳ ಪೋಷಕರು ಕೂಡಾ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸುವಂತಾಗಲು ಅವರಿಂದಲೂ‌ ಪ್ರತಿ ತಿಂಗಳು ಹಣ ಪಡೆಯಲು ಮನವೊಲಿಸಬೇಕು. ಬದಲಾಗಿ ಯಾವುದೇ ಬಲವಂತ ಮಾಡಬಾರದು" ಎಂದು SDMC ಗೆ ತಿಳಿಸಿದೆ. 

"ಸಂವಿಧಾನದ 21 ಎ ವಿಧಿ ಪ್ರಕಾರ ಮಕ್ಕಳಿಗೆ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಇಂತಹ ಸುತ್ತೋಲೆಯಿಂದ ಬಡ, ಕೂಲಿ ಕಾರ್ಮಿಕರ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಮಕ್ಕಳು ಶಿಕ್ಷಣದಿಂದ ದೂರವೇ ಉಳಿಯಬಹುದು" ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. 

Ads on article

Advertise in articles 1

advertising articles 2

Advertise under the article