-->
ಟೋಲ್ ಮುತ್ತಿಗೆ; ಪೊಲೀಸ್ ಲಾಠಿ ಚಾರ್ಜ್ ನಿಂದ ಗಾಯ

ಟೋಲ್ ಮುತ್ತಿಗೆ; ಪೊಲೀಸ್ ಲಾಠಿ ಚಾರ್ಜ್ ನಿಂದ ಗಾಯ



ಮಂಗಳೂರು: NITK ಟೋಲ್ ಸಮಯದಲ್ಲಿ ನಡೆದ ನೂಕಾಟ ತಳ್ಳಾಟ ವೇಳೆ ಪೊಲೀಸ್ ಲಾಠಿಚಾರ್ಜ್ ನಿಂದ ಪ್ರತಿಭಟನಾಕಾರನಿಗೆ ಗಾಯವಾಗಿದ್ದಾಗಿ ಹೋರಾಟಗಾರರು ಆರೋಪಿಸಿದ್ದಾರೆ. 



ಅಬ್ದುಲ್ ಖಾದರ್ ಎಂಬವರ ಕಣ್ಣು ಹಾಗೂ ಕೈಗೆ ಗಾಯವಾಗಿದ್ದಾಗಿ ಹೋರಾಟಗಾರರು ತಿಳಿಸಿದ್ದಾರೆ. ಗಾಯಾಳುವಿಗೆ ಸುರತ್ಕಲ್ ನ ಖಾಸಗಿ ಆಸ್ಪತ್ರೆ ಚಿಕಿತ್ಸೆ ಕೊಡಿಸಿದ್ದಾಗಿ ಹೋರಾಟಗಾರ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪ್ಪಾಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 


ಇನ್ನು ಮುತ್ತಿಗೆ ವೇಳೆ ವಶಕ್ಕೆ ಪಡೆಯಲಾದ ಪ್ರತಿಭಟನಕಾರರನ್ನು ಪಾಂಡೇಶ್ವರ ಠಾಣೆ, ಸುರತ್ಕಲ್ ಬಂಟರ ಭವನ ಮುಂತಾದೆಡೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article