ಮಂಗಳೂರು: ಗುರುವಾರ ಮಂಗಳೂರಿಗೆ ಬಿಕೆ ಹರಿಪ್ರಸಾದ್! ಅಬ್ದುಲ್ ರಹಿಮಾನ್ ಮನೆಗೂ ಭೇಟಿ!
Tuesday, June 3, 2025
ಮಂಗಳೂರು: ಮೇ 5 ರ ಗುರುವಾರ ಮಂಗಳೂರಿಗೆ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗಮಿಸಲಿದ್ದಾರೆ. ಎರಡು ದಿನಗಳ ಕಾಲ ಮಂಗಳೂರಿನ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.
ಮೇ 5 ರ ಬೆಳಗ್ಗೆ 11 ಗಂಟೆ ವೇಳೆ ನಗರಕ್ಕೆ ಆಗಮಿಸಲಿರುವ ಅವರು ಮೊದಲಿಗೆ ಸರ್ಕ್ಯೂಟ್ ಹೌಸ್ನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಕುದ್ರೋಳಿ ದೇಗುಲ, ಕಂಕನಾಡಿಯಲ್ಲಿ ಉಲಮಾ ಒಕ್ಕೂಟದ ಕಾರ್ಯಕ್ರಮ ಹಾಗೂ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹಿಮಾನ್ ಮನೆಗೆ ಭೇಟಿ ನೀಡಲಿದ್ದಾರೆ. ಶುಕ್ರವಾರ ದಿನವಿಡೀ ನಗರದಲ್ಲಿರುವ ಅವರು ಬಳಿಕ ಸಾಯಂಕಾಲ ವೇಳೆಗೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ಇತ್ತೀಚೆಗೆ ಅಬ್ದುಲ್ ರಹಿಮಾನ್ ಹತ್ಯೆ ಬಳಿಕ ಕಾಂಗ್ರೆಸ್ನ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳ ರಾಜೀನಾಮೆ ಹಾಗೂ ಕರಾವಳಿಯಲ್ಲಾದ ಕೋಮು ತಲ್ಲಣ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಕೆಹೆಚ್ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಇದಾಗಿ ಒಂದು ವಾರದ ಬಳಿಕ ಇದೀಗ ಬಿಕೆ ಹರಿಪ್ರಸಾದ್ ಮಂಗಳೂರಿಗೆ ಆಗಮಿಸುತ್ತಿದ್ದಾರೆ.