-->
ಮಂಗಳೂರು: ಮಾತಿನ ಭರದಲ್ಲಿ ಎಡವಿದ ಸದಾನಂದ ಶೆಟ್ಟಿ! ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ!

ಮಂಗಳೂರು: ಮಾತಿನ ಭರದಲ್ಲಿ ಎಡವಿದ ಸದಾನಂದ ಶೆಟ್ಟಿ! ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ!

ಮಂಗಳೂರು: ಬಂಟ್ವಾಳ ಬಂಟರ ಸಂಘದ ವಿಂಶತಿ ಕಾರ್ಯಕ್ರಮದ ವೇದಿಕೆಯಲ್ಲಿ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ, ಶ್ರೀದೇವಿ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕ ಎ. ಸದಾನಂದ ಶೆಟ್ಟಿ ಅವರು ಮಾತಿನ ಭರಾಟೆಯಲ್ಲಿ ಎಡವಿದ್ದು, ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಕುರಿತು ಒಂದು ವರ್ಗ ಆಕ್ಷೇಪವೆತ್ತಿದೆ.


"ವಿಶ್ವ ಬಂಟರ ಸಂಘದ ಕಾರ್ಯಕ್ರಮ ಅಂದ್ರೇನೆ ಹಾಗೆ. ಎಲ್ಲ ಸಮಾಜದವರೂ ಬರುತ್ತಾರೆ. ಪತ್ರಿಕೆಯಲ್ಲಿ ಮರುದಿನದ ಊಟೋಪಚಾರ ಮಾಹಿತಿ ಹಾಕುತ್ತಾರೆ. ಇದನ್ನ ನೋಡಿ ಎಲ್ಲರೂ ಊಟಕ್ಕೆಂದು ಬರುತ್ತಾರೆ. ರಮಾನಾಥ ರೈ ಬರುವಾಗವಂತೂ ಬ್ಯಾರಿಗಳ ಮಕ್ಕಳು ಅಲ್ಲೇ ಮುಗಿಬೀಳುತ್ತಾರೆ. ಅವನಿಗೆ ಬ್ಯಾರಿಗಳು ಬಿಟ್ಟರೆ ಬೇರೆ ಯಾರು ಸಿಗೋದೂ ಇಲ್ಲ" ಎಂದು ಹೇಳಿದ್ದಾರೆ. ಈ ವೀಡಿಯೋ ತುಣುಕು ಈಗ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 

ಈ ಸಂದರ್ಭ ವೇದಿಕೆಯಲ್ಲಿ ಡಾ‌. ಮೋಹನ್ ಆಳ್ವ, ಎಂಎಲ್‌ಸಿ ಡಾ‌‌. ಮಂಜುನಾಥ ಭಂಡಾರಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article