-->
PUTTUR: ಶಾಸಕ ಅಶೋಕ್‌ ರೈ ಪರ ಬ್ಯಾಟ್ ಬೀಸಿದ ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ!!

PUTTUR: ಶಾಸಕ ಅಶೋಕ್‌ ರೈ ಪರ ಬ್ಯಾಟ್ ಬೀಸಿದ ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ!!

ಪುತ್ತೂರು: ವಿಎಚ್ ಪಿ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಅಶೋಕ್ ರೈ ಪರ ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ ಬ್ಯಾಟಿಂಗ್ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಶೋಕ್ ರೈ ಅವರು ಶಾಸಕರಾದ ಮೇಲೆ ಎಷ್ಟು ಕೆಲಸ ಮಾಡಿದ್ದಾರೆ. ಅದೆಷ್ಟೋ ವರ್ಷಗಳಿಂದ ಬಡವರಿಗೆ ಸೀರೆ, ಬೆಡ್ ಶೀಟ್ ಹಂಚುವಂತ ಕಾರ್ಯ ಮಾಡುತ್ತಾ ಬಂದಿದ್ದಾರೆ. ಅಶೋಕ್ ರೈಗಳು ಸೀರೆ, ಬೆಡ್ ಶೀಟ್ ಗಳನ್ನ ಹಂಚುವ ಕಾರ್ಯಕ್ರಮಕ್ಕೆ ಎಲ್ಲಾ ಧರ್ಮದವರು ಬರಲ್ವಾ. ಅದರಲ್ಲಿ ಕಾಂಗ್ರೆಸ್, ಬಿಜೆಪಿ, ಎಸ್ ಡಿಪಿಐ ಹೀಗೆ ಎಲ್ಲಾ ಪಕ್ಷದ ಮತದಾರರು ಭಾಗಿಯಾಗಲ್ವ. ಹಾಗೆಯೇ ಶಾಸಕರ ನೆಲೆಯಲ್ಲಿ, ಓರ್ವ ಹಿಂದೂವಾಗಿ ಧರ್ಮದ ಆಧಾರದಲ್ಲಿ ಅಶೋಕ್ ರೈಗಳಿಗೆ ವಿಎಚ್ ಪಿಯಂತಹ ಕಾರ್ಯಕ್ರಮದಿಂದ ಆಹ್ವಾನವಿರುವಾಗ ಹೋಗುವುದು ಸರಿಯಾದ ನಿರ್ಧಾರ ಎಂದು ವಿರೋಧಿ ಬಣಕ್ಕೆ ಚಾಟಿ ಬೀಸಿದ್ದಾರೆ. 

ಅಶೋಕ್ ರೈಗಳು ಪುತ್ತೂರು ತಾಲೂಕಿಗೆ ಶಾಸಕರು. ಒಂದು ಧರ್ಮ ಅಥವಾ ಪಂಗಡಕ್ಕೆ ಸೀಮಿತವಾದ ಶಾಸಕರಲ್ಲ. ಒಂದು ಕಾರ್ಯಕ್ರಮದ ವಿಚಾರವನ್ನಿಟುಕೊಂಡು, ಹಲವಾರು ಚರ್ಚೆಗಳನ್ನು ಹುಟ್ಟು ಹಾಕುವ ಕಾಂಗ್ರೆಸ್ಸಿಗರ ಧೋರಣೆ ಸರಿಯಲ್ಲ ಎಂದರು. 

ಇನ್ನು ಅಶೋಕ್ ರೈಗಳು ಯಾವುದೇ ಪಕ್ಷದ ಕಾರ್ಯಕ್ರಮಕ್ಕೆ ಹೋಗಿಲ್ಲ. ಹಾಗಿರುವಾಗ ಮನುಷ್ಯನಾದವ ರೋಗಗ್ರಸ್ಥನಾಗಬಾರದು. ಸಮಾಜದಲ್ಲಿ ಬಿತ್ತುವ ಒಂದೊಂದು ಬೀಜವೂ ಸಹ ಒಳ್ಳೆಯ ಬೀಜ ಆಗಿರಬೇಕು. ಶಾಸಕರಾದ ನೆಲೆಯಲ್ಲಿ ವಿಎಚ್ ಪಿ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಅದು ಅವರ ಧರ್ಮ. ಯಾವುದೇ ಪಾರ್ಟಿಯ ಪ್ರಚಾರ ಸಭೆಗೆ ಹೋಗಿಲ್ಲ. ಈ ಬಗ್ಗೆ ಕಾಂಗ್ರೆಸ್ಸಿನಲ್ಲಾಗುವ ಚರ್ಚೆ ಶೂನ್ಯ ಎಂದರು. 

Ads on article

Advertise in articles 1

advertising articles 2

Advertise under the article