ಗ್ಯಾರಂಟಿ ಇಲ್ಲದ ಪುತ್ತೂರಿನ ಕಾಂಗ್ರೆಸ್- ಬೂಡಿಯಾರ್
ಪುತ್ತೂರು: ಪುತ್ತೂರಿನಲ್ಲಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ನೆಲಕಚ್ಚಿ ಹೋಗಲಿಗೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಬೂಡಿಯಾರ್ ಪುರುಷೋತ್ತಮ ರೈ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ್ರು, ಪುತ್ತೂರಿನ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಶಾಸಕ ಅಶೋಕ್ ರೈ ಕೋಡಿಂಬಾಡಿ ಅವ್ರನ್ನ ಹೊರತುಪಡಿಸಿ ಉಳಿದ ನಾಯಕರು ಕಾಂಗ್ರೆಸ್ ಪಕ್ಷವನ್ನ ಮೇಲೆತ್ತಲು ಪ್ರಯತ್ನಿಸುತ್ತಿಲ್ಲ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪುತ್ತೂರಿನಲ್ಲಿ ನೆಲಕಚ್ಚಲಿದೆ ಎಂದರು.
ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಕಾಂಗ್ರೆಸ್ ನಾಯಕರು ನಾವು ಅಷ್ಟು ಅಂತರದಲ್ಲಿ ಗೆಲ್ತೀವಿ. ಇಷ್ಟು ಅಂತರ ಸಿಗಬಹುದು ಎಂದು ಲೆಕ್ಕಗಳನ್ನೇ ಹಾಕಿದ್ದು ಬಿಟ್ಟರೇ, ಪಕ್ಷಕ್ಕೆ ಬೇಕಾಗಿ ಯಾವುದೇ ಕೆಲಸಗಳನ್ನ ಮಾಡಿಲ್ಲ. ಜೊತೆಗೆ ಹಿರಿಯ ನಾಯಕರನ್ನ ಕಡೆಗಣಿಸಿಕೊಂಡು ಬಂದಿದ್ದಾರೆ. ಈಗಿರುವ ಕೆಲವೊಂದು ಪುತ್ತೂರಿನ ಕಾಂಗ್ರೆಸ್ಸಿಗರು ತಮ್ಮದೇ ನಿರ್ಧಾರಗಳನ್ನ ಬಯಸಿ, ಹಿರಿಯರನ್ನ ಕಡೆಗಣಿಸುವುದಲ್ಲದೇ, ಕಾಂಗ್ರೆಸ್ಸಿಗೆ ಬೇಕಾಗಿ ನಮ್ಮಿಂದ ಒಂದೂ ಸಲಹೆಯನ್ನೂ ಕೇಳಿಲ್ಲ. ಹೀಗಾಗಿಯೇ ಪುತ್ತೂರಿನಲ್ಲಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಅಧಃಪತನ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.