ಮಂಗಳೂರು: ಒಂದೇ ಫೋಟೋದಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಹಾಗೂ ಹರೀಶ್ ಪೂಂಜಾ! ಜಾಲತಾಣದಲ್ಲಿ ಫೋಟೋ ವೈರಲ್!
Sunday, May 25, 2025
ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಬಜರಂಗದಳ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ಆರೋಪಿಗಳಲ್ಲಿ ಓರ್ವನಾದ ಆದಿಲ್ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.
ಯಾವುದೋ ಶುಭ ಕಾರ್ಯಕ್ರಮದಲ್ಲಿ ಹರೀಶ್ ಪೂಂಜಾ ಅವರಿದ್ದು, ಜೊತೆಗೆ ಅದೇ ಫೋಟೋದಲ್ಲಿ ಸುಹಾಸ್ ಹತ್ಯೆಗೆ ಸುಫಾರಿ ನೀಡಿದ್ದ ಆದಿಲ್ ಕೂಡಾ ಇದ್ದು, ಇದು ತೀರಾ ಇತ್ತೀಚಿನ (ಸುಹಾಸ್ ಹತ್ಯೆಗೆ ಮುಂಚಿನ) ಫೋಟೋ ಎಂದು ಕೆಲವರು ಹೇಳಿಕೊಂಡಿದ್ದಾರೆ. ಸದ್ಯ ಆದಿಲ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದಿಲ್, 2022 ಜುಲೈ 28 ರಂದು ಹತ್ಯೆಯಾದ ಸುರತ್ಕಲ್ನ ಫಾಝಿಲ್ ಸಹೋದರನಾಗಿದ್ದಾನೆ.
ಈ ಮಧ್ಯೆ ಶುಭ ಕಾರ್ಯಕ್ರಮದ ಒಂದೇ ವೇದಿಕೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಆದಿಲ್ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.