-->
ಪುತ್ತೂರಿನ ಮಂಜಲ್ಪಡ್ಪಿನಲ್ಲಿ ಗುಡ್ಡದ ಮಣ್ಣು ರಸ್ತೆಯ ಪಾಲು!!

ಪುತ್ತೂರಿನ ಮಂಜಲ್ಪಡ್ಪಿನಲ್ಲಿ ಗುಡ್ಡದ ಮಣ್ಣು ರಸ್ತೆಯ ಪಾಲು!!



ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಬೈಪಾಸ್ ರಸ್ತೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಉದಯಗಿರಿ ಬಾರ್ ಆಂಡ್ ರೆಸ್ಟೋರೆಂಟ್ ಪಕ್ಕದಲ್ಲಿರುವ ಗುಡ್ಡವೊಂದರ ಮಣ್ಣು ರಾಷ್ಟ್ರೀಯ ಹೆದ್ದಾರಿಗೆ ಬಿದ್ದು ಕೆಸರುಮಯವಾಗಿದೆ. ಇದರಿಂದಾಗಿ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೋಗುವಾಗ  ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ. 


ಸದ್ಯ ರಸ್ತೆಗೆ ಗುಡ್ಡದ ಮಣ್ಣು ಬರದಂತೆ ಸಂಬಂಧಪಟ್ಟ ಆ ಜಾಗದ ಮಾಲೀಕರು ಅಥವಾ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ವಾಹನ ಸವಾರರು ಸ್ಕಿಡ್ ಆಗಿ ಬೀಳುವ ಸಾಧ್ಯತೆಯೂ ಹೆಚ್ಚಿದೆ.



Ads on article

Advertise in articles 1

advertising articles 2

Advertise under the article